ಡಿಸ್ಮಿಸಲ್-ಇಂಕ್ರಿಮೆAಟ್ ಕಡಿತ- ವಿಪರೀತ ದಂಡಗಳು- ಕೆಲಸದ ಒತ್ತಡ ಹೆಚ್ಚಳ ವಿರೋಧಿಸಿ
ಸಾರಿಗೆ ನೌಕರರಿಂದ ಜುಲೈ- ೬ ಪ್ರತಿಭಟನೆ.
ಕರಾರಸಾನಿಗಮಗಳಲ್ಲಿ ೧೦೭೦೦೦ ಕಾರ್ಮಿಕರು ದುಡಿಯುತ್ತಿದ್ದಾರೆ. ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ಸಂಘಗಳೊAದಿಗೆ ಚರ್ಚೆ ಮಾಡಿ ಬೇಡಿಕೆಗಳನ್ನು ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳನ್ನು ಸರ್ಕಾರ ಮತ್ತು ಆಡಳಿತವರ್ಗಗಳು ಮಾಡಲೇ ಇಲ್ಲ ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ದಾಳಿ ನಡೆಸಲಾಯಿತು. ಎಸ್ಮಾ ಕಾಯಿದೆಯನ್ನು ಜಾರಿ ಮಾಡಿ ಧಮನಕಾರಿ ನೀತಿಗಳನ್ನು ಅನುಸರಿಸಿದರು. ಡಿಸೆಂಬರ್- ೨೦೨೦ ಮತ್ತು ಏಪ್ರಿಲ್- ೨೦೨೧ ನಡೆದ ೧೫ ದಿವಸಗಳ ಮುಷ್ಕರದ ವೇಳೆ ಕಾರ್ಮಿಕರ ಬೇಡಿಕೆಗಳನ್ನು ಚರ್ಚೆ ಮಾಡಿ ಬಗೆಹರಿಸಲಿಲ್ಲ.ಬದಲು ಸಾವಿರಾರು ಕಾರ್ಮಿಕರ ವರ್ಗಾವಣೆ- ಡಿಸ್ಮಿಸಲ್ ಗಳು- ಲಕ್ಷ ಕಾರ್ಮಿಕರಿಂದ ಹತ್ತಾರು ಕೋಟಿ ದಂಡ- ಪೋಲಿಸ್ ಮೊಕದ್ದಮ್ಮೆ ಹಾಕಿಸುವುದು ಮುಂತಾದ ಧಮನಕಾರಿ ಧೋರಣೆ ಅನುಸರಿಸಿದರು. ೨೦೩೦ ರೊಳಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ತಂದು ಖಾಸಗೀಕರಣ ಮಾಡುವುದಾಗಿ ಘೋಷಿಸಿದರು. ಸಾರಿಗೆ ಕಾರ್ಮಿಕರಿಗೆ ೧-೧-೨೦೨೦ ರಿಂದ ವೇತನ ಪರಿಷ್ಕರಣೆ ಆಗಬೇಕಿತ್ತು. ಅದರ ಬಗ್ಗೆ ಕಾರ್ಮಿಕ ಸಂಘಗಳೊAದಿಗೆ ಚರ್ಚಿಸಲೇ ಇಲ್ಲ. ಕಾರ್ಮಿಕರ ಮೇಲೆ ಸೇಡಿನ ಮನೋಬಾವನೆ ಇಟ್ಟುಕೊಂಡು ವೇತನ ಪರಿಷ್ಕರಣೆ ಮಾಡಲಿಲ್ಲ.ಈ ವೇಳೆ ನಿಗಮಗಳಲ್ಲಿನ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಜುಲೈ- ೨೦೨೨ ವೇತನ ಪರಿಷ್ಕರಣೆ ಮತ್ತಿತರೆ ಸೌಲಬ್ಯಗಳು ಹಾಗೂ ಸಾರಿಗೆ ನಿಗಮಗಳನ್ನು ರಕ್ಷಿಸುವ ಬೇಡಿಕೆಗಳನ್ನು ಕೊಟ್ಟೆವು. ನಂತರ ಚಳುವಳಿ ನಡೆಸಿದೆವು. ಅಂತಿಮವಾಗಿ ಮಾರ್ಚಿ- ೨೦೨೩ ರಲ್ಲಿ ಮುಷ್ಕರ ನಡೆಸುವುದಾಗಿ ತೀರ್ಮಾನಿಸಲಾಯಿತು. ಆವಾಗ್ಗೆ ಸರ್ಕಾರ ಜಂಟಿ ಕ್ರಿಯಾ ಸಮಿತಿಯ ಜೊತೆ ಮಾತುಕತೆ ನಡೆಸಿ ಶೇ.೧೫ ಹೆಚ್ಚಳ ಮಾಡಿ ಮಾರ್ಚಿ- ೨೦೨೩ ರಿಂದ ಜಾರಿಗೆ ತರಲಾಯಿತು. ೧-೧-೨೦೨೦ ರಿಂದ ೨೮-೦೨-೨೦೨೩ ರವರೆಗೆ ೩೮ ತಿಂಗಳ ಕಾಲ ಅರಿಯರ್ಸ್ ನೀಡಿಲ್ಲ. ಇತರೆ ೧೫ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿಲಿಲ್ಲ.ಇದರಿಂದ ಸಾರಿಗೆ ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಆಡಳಿತ- ಕಿರುಕುಳಗಳು- ಕೆಲಸದ ಒತ್ತಡಗಳು- ಸೇವಾಸೌಲಬ್ಯಗಳಿಗೆ ಪರಿಹಾರ ದೊರೆತಿಲ್ಲ. ವಿಭಾಗಿಯ ಮಟ್ಟದಲ್ಲಿ ಡಿಸ್ಮಿಸಲ್- ಕಾರ್ಮಿಕರ ಶೋಷಣೆ- ಕಿರುಕುಳ- ಇಂಕ್ರಿಮೆAಟ್ ಕಡಿತ- ವಿಪರೀತ ದಂಡ ಹಾಕುವುದು- ಬಾರ್ ಡ್ಯೂಟಿ ಹೆಸರಿನಲ್ಲಿ ತೀವ್ರವಾದ ಕೆಲಸದ ಒತ್ತಡಗಳು ಹೆಚ್ಚಳವಾಗಿವೆ.ಕಾರ್ಮಿಕರ ಸಮಸ್ಯೆಗಳ ಬಗ್ಗೆ ಆಡಳಿತ ವರ್ಗದ ಯಾವುದೇ ಹಂತದಲ್ಲಿ ಚರ್ಚೆ ಮಾಡುವ ಪದ್ದತಿಯೇ ಇಲ್ಲ. ಏಕಪಕ್ಷೀಯ ತೀರ್ಮಾನ. ಕಾರ್ಮಿಕರಿಗೆ ಪ್ರಜಾಸತ್ತಾತ್ಮಕ ಹಕ್ಕುಗಳು ಇಲ್ಲವಾಗಿವೆ.ಕಾರ್ಮಿಕರು ಪ್ರಶ್ನಿಸಿದರೆ ವಿಶೇಷವರದಿಪಡೆದು ತೀವ್ರವಾದ ಕ್ರಮಗಳನ್ನು ಜರುಗಿಸುವುದು. ಸಾರಿಗೆ ನಿಗಮಗಳಿಗೆ ಅನ್ವಯಿಸುವ ಕಾನೂನುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ.
ತುಮಕೂರು ವಿಭಾಗದಲ್ಲಿಯೂ ಕಾರ್ಮಿಕರ ಕೊರತೆ ಇದೆ. ತಾಂತ್ರಿಕ ಸಿಬ್ಬಂದಿಗಳ ಕೊರತೆ- ಉತ್ತಮ ಗುಣ ಮಟ್ಟದ ಬಿಡಿಬಾಗಗಳು ಸಮಯಕ್ಕೆ ಸರಿಯಾಗಿ ಸರಬರಾಜು ಅಗಲ್ಲ. ಹಳೇ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಷ್ಟೆಲ್ಲಾ ತೊಂದರೆಗಳು ಇದ್ದರು ಸಹ ವಾಹನಗಳ ದುರಸ್ಥಿ ಮಾಡಲು ವಿಪರೀತ ಶ್ರಮಪಟ್ಟು ಕೆಲಸ ಮಾಡುತ್ತಾರೆ. ಶಿರಾ ಘಟಕದಲ್ಲಿ ಕೆಲಸ ಮಾಡುವ ೪ ತಾಂತ್ರಿಕ ಸಿಬ್ಬಂದಿಗಳಿಗೆ ಕೆಲಸ ಮಾಡಿದ ದಿವಸವೇ ಮೆಮೋ ಕೊಟ್ಟು ವಿಚಾರಣೆಯೂ ಇಲ್ಲದೆ ೧ ವರ್ಷ ಅವಧಿಗೆ ಇಂಕ್ರಿಮೆAಟ್ ಕಡಿತ ಮಾಡಲಾಗಿದೆ. ಅIಖಿU ಸಂಘದ ಉಪಾದ್ಯಕ್ಷರಾದ ಶ್ರೀ ಪಿ.ಮೋಹನ್ ದಾಸ್ ರವರು ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ ಎಂದು ಆತನ ಮೇಲೆ ಅಂದಿನ ದಿವಸವೇ ಮತ್ತೊಂದು ಮೆಮೋ ಕೊಡಿಸಿ ಸೇಡಿನ ಕ್ರಮವಾಗಿ ಶಿಕ್ಷಿಸಲು ವಿಚಾರಣೆ ನಡೆಸುತ್ತಿದ್ದಾರೆ. ಶಿರಾ ಘಟಕದ ಚಾರ್ಜಮನ್ ಆದ ಶ್ರೀ ಹೇಮಂತ ಕುಮಾರ್ ರವರು ತಾಂತ್ರಿಕ ಸಿಬ್ಬಂದಿಗಳಿಗೆ ಮೆಮೋ ನೀಡಿ ಇಂಕ್ರಿಮೆAಟ್ ಕಡಿತ ಮಾಡಿಸುತ್ತೇನೆ ಅಂತ ಧಮಕಿ ಹಾಕುತ್ತಾರಂತೆ.
ಇAಕ್ರಿಮೆAಟ್ ಕಡಿತ ಮಾಡಿಸೋದು- ಮಾಡೊದು ನೀರು ಕುಡಿದಷ್ಟು ಸರಳ ಮಾಡಿಕೊಂಡಿದ್ದಾರೆ. ಇಂತಹ ದೌರ್ಜನ್ಯದ ಆಡಳತವನ್ನು ಖಂಡಿಸುತ್ತೇವೆ.
ವಿಬಾಗೀಯ ನಿಯಂತ್ರಣಾಧಿಕಾರಿಗಳನ್ನು ಕಳೆದ ೩ ತಿಂಗಳ ಹಿಂದೆ ನಮ್ಮ ಸಂಘದ ಪದಾಧಿಕಾರಿಗಳು ಬೇಟಿ ಮಾಡಿ ಬೇಡಿಕೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಿ ಸಭೆ ಕರೆದು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲು ಕೋರಿದ್ದೆವು.ಸಮಸ್ಯೆಗಳನ್ನು ಪರಿಹರಿಸುವ ಬದಲು ಇನ್ನೂ ಸೇಡಿನ ಕ್ರಮವನ್ನು ಹೆಚ್ಚಳ ಮಾಡಿದ್ದಾರೆ.
ವಿಪರೀತ ದಂಡಗಳು- ಕೆಲಸದ ಒತ್ತಡ ಹೆಚ್ಚಳ ವಿರೋಧಿಸಿ ಸಾರಿಗೆ ನೌಕರರಿಂದ ಪ್ರತಿಭಟನೆ.

Leave a comment
Leave a comment