ಎಂ.ಎಸ್.ಆರ್ ಸಂಸ್ಥೆ- ಕುಂಚಿಟಿಗ ಸಂಘ ಒಡಂಬಡಿಕೆ
ಶ್ರೀರoಗ ವಿದ್ಯಾಮಂದಿರದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು
ತುಮಕೂರು: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿರುವ ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆ ಒಕ್ಕೂಟವು ಪ್ರೀ ಸ್ಕೂಲ್ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದ್ದು, ನಗರದ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ಅಂಗಸoಸ್ಥೆಯಾದ ಶ್ರೀರಂಗ ವಿದ್ಯಮಂದಿರ ಶಾಲೆ ಹಾಗೂ ನವಕೀಸ್ ಕಿಂಡರ್ನ ಅಭಿವೃದ್ಧಿಗಾಗಿ ಸಂಘದೊoದಿಗೆ ಪಾಲುದಾರಿಕೆಯ ಒಡಂಬಡಿಕೆ ಮಾಡಿಕೊಂಡಿದೆ.
ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಶ್ರೀಧರ ಮಂಗಳವಾರ ಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ಶ್ರೀರಂಗ ವಿದ್ಯಾಮಂದಿರದಲ್ಲಿ 1ರಿಂದ 10ನೇ ತರಗತಿವರೆಗೆ ಮಕ್ಕಳು ಕಲಿಯುತ್ತಿದ್ದಾರೆ. ಸಂಸ್ಥೆಯನ್ನು ವ್ಯಾಪಾರವಾಗಿ ಪರಿಗಣಿಸಿದೆ ಸಂಘದಿoದ ಸೇವೆಯಾಗಿ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಮಕ್ಕಳಿಗೆ ಅತ್ಯಾಧುನಿಕ ಶೈಕ್ಷಣಿಕ ಸೇವೆ ಒದಗಿಸುವ ಸಲುವಾಗಿ ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆ ಒಕ್ಕೂಟದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ನಗರದ ಮಹಾಲಕ್ಷ್ಮಿ ನಗರದಲ್ಲಿ ವಿಶಾಲ ಆವರಣದಲ್ಲಿ ಸುಸಜ್ಜಿತವಾಗಿರುವ ಶ್ರೀರಂಗ ವಿದ್ಯಾಮಂದಿರದಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಎಂ.ಎಸ್.ರಾಮಯ್ಯ ಸಂಸ್ಥೆ ಸಹಯೋಗದೊಂದಿಗೆ ವಕೀಸ್ ಕಿಂಡರ್ ಪ್ರಿ ಸ್ಕೂಲ್, ಎಲ್.ಕೆ.ಜಿ, ಯು.ಕೆ.ಜಿ ಮಕ್ಕಳಿಗೆ ಪ್ರವೇಶ ನಿಡಲಾಗುತ್ತಿದೆ ಎಂದರು.
Tumkur ಶ್ರೀರoಗ ವಿದ್ಯಾಮಂದಿರದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು

Leave a comment
Leave a comment