ತುಮಕೂರು ತಾಲ್ಲೋಕು ಕಂಬಾಳು ಗ್ರಾಮದ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ೧,೫೦,೦೦೦/-ರೂಗಳ ಡಿಡಿಯನ್ನು ದೇವಾಲಯದ ಆಡಳಿತ ಮಂಡಳಿಯವರಿಗೆ ತಾಲ್ಲೋಕು ಯೋಜನಾಧಿಕಾರಿಗಳಾದ ಶ್ರೀಮತಿ ಸುನಿತಾಪ್ರಭುರವರು ವಿತರಿಸಿದರು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ಪಾಂಡಣ್ಣ,ಮೇಲ್ವಿಚಾರಕರಾದ ವಿಶ್ವನಾಥ್,ಸೆಲ್ಕೋ ಸೋಲಾರ್ ಮೇಲ್ವಿಚಾರಕರಾದ ಸುರೇಶ್,ಸೇವಾಪ್ರತಿನಿಧಿಗಳಾದ ಸಯ್ಯದ ಮೂಸಿನಾ,ಚೆನ್ನಿಗರಾಯಪ್ಪ,ಊರಿನ ಗಣ್ಯರು,ತಂಡದ ಸದಸ್ಯರುಗಳು ಉಪಸ್ಥಿತರಿದ್ದರು.