ಡಾ. ಗುಬ್ಬಿ ವೀರಣ್ಣ ಸಮಾಧಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಒತ್ತಾಯತುಮಕೂರು- ಗುಬ್ಬೀ ವೀರಣ್ಣ ಕಂಪೆನಿಯ ಮಾಲೀಕರಾಗಿದ್ದ ಡಾ. ಗುಬ್ಬಿ ವೀರಣ್ಣನವರ ಸಮಾಧಿಯನ್ನು ಅಭಿವೃದ್ಧಿಪಡಿಸಿ ಯಾತ್ರಾ ಸ್ಥಳವನ್ನಾಗಿ ಮಾಡುವಂತೆ ಆಡಳಿತ ಸುಧಾರಣಾ ಸಲಹಾ ವೇದಿಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.ವೇದಿಕೆಯ ಅಧ್ಯಕ್ಷರಾದ ಬಿ.ಹೆಚ್. ಸುರೇಶ್ ನೇತೃತ್ವದಲ್ಲಿ ಪದಾಧಿಕಾರಿಗಳು ನಗರದಲ್ಲಿರುವ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರನ್ನು ಭೇಟಿ ಮಾಡಿ ಡಾ. ಗುಬ್ಬಿ ವೀರಣ್ಣನವರ ಸಮಾಧಿಯನ್ನು ಅಭಿವೃದ್ಧಿಪಡಿಸುವಂತೆ ಮನವಿ ಸಲ್ಲಿಸಿದರು.