ಗಾಣಗಾಪುರ ಬಂದ ಸಂಪೂರ್ಣ ಯಶಸ್ವಿ, ಬಂದ್ ಬಿಸಿಗೆ ಹೈರಾಣಾದ ದತ್ತ ಭಕ್ತರು. ಛಲ ಬಿಡದ ನಾಟಿಕಾರ ಹೋರಾಟ ಮುಂದುವರಿಕೆ.

ಅಫಜಲಪೂರ : ಗಾಣಗಾಪುರ ಅಭಿವೃದ್ಧಿಗಾಗಿ ನಡೆದ ಬಂದ ಸಂಪೂರ್ಣ ಯಶಸ್ವಿಯಾಗಿದೆ. ಶಿವಕುಮಾರ ನಾಟಿಕಾರ ನೇತೃತ್ವದಲ್ಲಿ ಗಾಣಗಾಪುರ ಗ್ರಾಮಸ್ಥರು ಅಭಿವೃದ್ಧಿಗಾಗಿ ಇಂದು ಬಂದಗೆ ಕರೆ ನೀಡಿದ್ದರು. ಇಂದು ಜಿಲ್ಲಾಧಿಕಾರಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಭಿವೃದ್ಧಿ ವಿಷಯ ಕುರಿತು ಚರ್ಚೆ ನಡೆಸುವವರು ಎಂದು ಡಿ ಎಸ್ಪಿ ಹಾಗೂ ತಹಸೀಲ್ದಾರ್ ಹೋರಾಟಗಾರರಿಗೆ ಮನವರಿಕೆ ಮಾಡಿದಾಗ ಬಂದ ಕೈಬಿಟ್ಟು ಧರಣಿ ಸ್ಥಳಕ್ಕೆ ಹೋರಾಟಗಾರರು ತೆರಳಿದರು.ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾದ ಬಂದ ಮದ್ಯಾಹ್ನ ಎರಡು ಗಂಟೆ ಯವರಿಗೆ ಬಹಳಷ್ಟು ಯಶಸ್ವಿಯಾಗಿ ನಡೆಯಿತು. ಗಾಣಗಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ ಮಾಡಲಾಯಿತು, ಇದರಿಂದ ವಿವಿಧ ರಾಜ್ಯಗಳಿಂದ ಬಂದ ದತ್ತ ಭಕ್ತರು ಕೆಲ ಕಾಲ ಸುಡುಬಿಸಿಲಲ್ಲಿ ಹೈರಾಣ ಆದರೂ. ಬಂದ ನಡುವೆಯೂ ಹಲವು ಜನ ಭಕ್ತರು ಬಗಲಲ್ಲಿ ಹಸುಗೂಸುಗಳನ್ನು ತೆಗೆದುಕೊಂಡು ದತ್ತ ದರ್ಶನಕ್ಕೆ ಬಂದು ದರ್ಶನ ಪಡೆದು ಹೈರಾಣಾದರು.ಬಂದ ಗೊತ್ತಿಲ್ಲದೆ ಹಲವು ಜನರು ಮದುವೆಗೆಂದು ಬಂದು ಪೆಚೆಗೆ ಸಿಲುಕಿದರು. ಹಲವು ಜನ ಮದುವೆಗೆಂದು ತಂದ ಸಾಮಾನುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಪ್ರಸಂಗ ಕೂಡ ನಡೆಯಿತು, ರಸ್ತೆ ಸಂಚಾರ ಬಂದ ಆಗಿದ್ದರಿಂದ ರೋಗಿಗಳ ನರಳಾಟವಂತೂ ಹೇಳತೀರಾದಾಗಿತ್ತು, ಬೆಳಿಗ್ಗೆನೇ ಎಲ್ಲ ಸಂಚಾರ ಬಂದ ಆಗಿ ಅಂಗಡಿ ಮುಂಗಟ್ಟುಗಳು ಸ್ವಯಂ ಬಂದ ಆಗಿದ್ದವು, ತಹಸೀಲ್ದಾರ್ ಸಂಜೀವಕುಮಾರ ದಾಸರ ಹೋರಾಟಗಾರರ ಮನವೊಲಿಸಲು ಪ್ರತಿಭಟನಾ ಸ್ಥಳಕ್ಕೆ ಸುಡು ಬಿಸಿಲಲ್ಲಿ ಸಂಗಮ ಮಾರ್ಗದಿಂದ ನಡೆದುಕೊಂಡು ಬಂದಿದ್ದು ಕಂಡು ಬಂತು, ಪರಿಸ್ಥಿತಿ ಹಾಗೂ ಬಂದ ಬಿಸಿ ಬಿಸಿಲು ಹೆಚ್ಚಾಗುತ್ತಿದ್ದಂತೆ ಕಾವೇರತೋಡಗಿತು, ಇದರಿಂದ ಬೀಗಿ ಪೊಲೀಸ ಬಂದೋಬಸ್ತ್ ಒದಗಿಸಲಾಗಿತ್ತು, ಇನ್ನು ಬಂದ ಇರುವ ಕಾರಣ ಗಾಣಗಾಪುರ ಬಸ್ಸ ನಿಲ್ದಾಣ ಸಂಪೂರ್ಣ ಬಸ್ಸುಗಳು ಇಲ್ಲದೆ ಬಿಕೋ ಎನ್ನುತಿತ್ತು, ಒಟ್ಟಾರೆಯಾಗಿ ಗಾಣಗಾಪುರ ಬಂದ ಸಂಪೂರ್ಣ ಯಶಸ್ವಿಯಾಗಿದ್ದು ನಾಳೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಅಭಿವೃದ್ಧಿ ವಿಷಯದ ಕುರಿತು ಚರ್ಚೆ ನಡೆಸುವ ಸಂಭವವಿದೆ ಎನ್ನಲಾಗಿದೆ.