ಪ್ರೀತಿ, ಸಾಮರಸ್ಯೆ ಸಿಗುವ ಕೇಂದ್ರ ರಂಗಭೂಮಿ, ರಂಗಭೂಮಿ ಪ್ರೀತಿ, ಸಹಬಾಳ್ವೆ, ಸಾಮರಸ್ಯ ಸಿಗುವ ಕೇಂದ್ರವಾಗಿದ್ದು ಹೊಸ ಅನ್ವೇಷಣೆಗೆ ಉತ್ತಮ ವೇದಿಕೆಯಾಗಿದೆ ಎಂದು ತುಮಕೂರು ವಿವಿ ವಿe್ಞÁನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ. ಶೇಟ್ ತಿಳಿಸಿದರು.ಅವರು ತುಮಕೂರಿನ ಗುಬ್ಬಿ ವೀರಣ್ಣ ರಂಗಮAದಿರದಲ್ಲಿ ಜರ್ನಿ ಥ್ರೂ ಲೈಫ್ ತಂಡದಿAದ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣಕಥೆ ಆಧರಿಸಿದ ಕಿರಗೂರಿನ ಗಯ್ಯಾಳಿಗಳು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ಭಾಷೆ, ಉಚ್ಛಾರವನ್ನು ತಿದ್ದುವ, ಮಾತನಾಡುವ ಅವಕಾಶವಿರುವುದು ರಂಗಭೂಮಿಯಲ್ಲಿ ಎಂದು ತಿಳಿಸಿದರು.ವ್ಯಕ್ತಿಯ ವಿಕಸನಕ್ಕೆ ರಂಗಭೂಮಿ ಸಹಕಾರಿ ಎಂದ ಅವರು ಯಾವುದೇ ಕಲಾಪ್ರಕಾರಗಳು ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ವೃತ್ತಿ, ಪ್ರವೃತ್ತಿಯ ನಡುವೆ ಇವುಗಳನ್ನು ರೂಢಿಸಿಕೊಂಡಾಗ ಮನುಷ್ಯನ ಬೆಳವಣಿಗೆ ಸಾಧ್ಯ ಎಂದರು.ರAಗಭೂಮಿ ಸೇರಿದಂತೆ ಎಲ್ಲ ಕಲಾ ಪ್ರಕಾರಗಳು ಜನರ ಕೊರತೆಯನ್ನು ಎದುರಿಸುತ್ತಿದೆ. ಆದರೆ ತುಮಕೂರಿನ ಗುಬ್ಬಿ ವೀರಣ್ಣ ರಂಗಮAದಿರದಲ್ಲಿ ಕಿರಗೂರಿನ ನಾಟಕ ಪ್ರದರ್ಶನ ನೋಡಲು ದೊಡ್ಡ ಸಂಖ್ಯೆಯ ಪ್ರೇಕ್ಷಕರು ಬಂದಿರುವುದು ಆಶಾದಾಯಕ ಬೆಳವಣಿಗೆ ಎಂದರು.ನಮ್ಮ ಕಾಲೇಜಿನ ವಿದ್ಯಾರ್ಥಿ ಪಲ್ಲವಿ ಈ ನಾಟಕ ನಿರ್ದೇಶಿಸುವ ಮೂಲಕ ಹೊಸ ಸಾಧ್ಯತೆಗಳ ಕಡೆ ಹೊರಳುತ್ತಿದ್ದಾರೆ. ಪ್ರತಿಭಾನ್ವಿತೆಯಾಗಿರುವ ಪಲ್ಲವಿ ಈಗಾಗಲೇ ಹಲವಾರು ನಾಟಕದಲ್ಲಿ ಅಭಿನಯಿಸಿ ನಿರ್ದೇಶನ ಕೂಡ ಮಾಡಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಝೆನ್ ಟೀಮ್ನ ಉಗಮ ಶ್ರೀನಿವಾಸ್ ಅವರು ಎರಡು ವರ್ಷಗಳ ಹಿಂದೆ ತುಮಕೂರಿನಲ್ಲಿ ಶಿವಮೊಗ್ಗ ರಂಗಾಯಣ ಆಯೋಜಿಸಿದ್ದ ಕಾಲೇಜು ರಂಗೋತ್ಸವದಲ್ಲಿ ರಂಗ ಸಂಚಾಲಕನಾಗಿದ್ದಾಗ ನಾಟಕದಲ್ಲಿ ಪಲ್ಲವಿ ಅವರು ಅಭಿನಯಿಸಿದ್ದರು. ಈಗ ರಂಗ ನಿರ್ದೇಶನ ಮಾಡುವ ಮೂಲಕ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವಂತಾಗಿದೆ ಎಂದರು.ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ನಮ್ಮ ಕಾಲದ ದೊಡ್ಡ ಲೇಖಕರು, ಅವರ ಎಲ್ಲಾ ಕೃತಿಗಳು ಕೂಡ ಬಹುತ್ವವನ್ನು ಸಾರುತ್ತವೆ. ತುಮಕೂರು ಮೊದಲಿನಿಂದಲೂ ರಂಗಭೂಮಿಗೆ ತನ್ನದೇ ಕೊಡುಗೆಯನ್ನು ನೀಡುತ್ತಾ ಬಂದಿದೆ. ಜಿಲ್ಲೆಯಲ್ಲಿ ವೃತ್ತಿ, ಹವ್ಯಾಸಿ ಹೀಗೆ ಎಲ್ಲಾ ರೀತಿಯ ತಂಡಗಳು ಇದ್ದು ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ ಎಂದರು.ಉತ್ತರ ಕರ್ನಾಟಕ ಭಾಗದಲ್ಲಿ ಸಣ್ಣಾಟ, ದೊಡ್ಡಾಟ, ಕರಾವಳಿಯಲ್ಲಿ ಯಕ್ಷಗಾನ ಹೇಗೋ ತುಮಕೂರಿನಲ್ಲಿ ಪೌರಾಣಿಕ ರಂಗಭೂಮಿಯ ಹೊಸ ಯುಗ ಆರಂಭವಾಗಿದೆ. ಹಲವಾರು ನಿರ್ದೇಶಕರು, ನಟರು ರಾಜ್ಯ, ರಾಷ್ಟç ಮಟ್ಟದಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ. ರಂಗಭೂಮಿ ಮೂಲಕ ಪರ್ಯಾಯ ಚಳುವಳಿ ತುಮಕೂರಿನಿಂದಲೇ ಆರಂಭವಾಗುತ್ತದೆ ಎಂದು ತಿಳಿಸಿದರು.ಜಾನಪದ, ಬುಡಕಟ್ಟು, ನಾಟಕ, ಸಂಗೀತ ಹೀಗೆ ಎಲ್ಲಾ ಪ್ರಕಾರಗಳಲ್ಲೂ ಜಿಲ್ಲೆಯ ಕೊಡುಗೆ ಹೆಚ್ಚಿದ್ದು ತುಮಕೂರು ಜಿಲ್ಲೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಯಲು ಸೀಮೆ ರಂಗಾಯಣವನ್ನು ಘೋಷಿಸಬೇಕು ಎಂದು ತಿಳಿಸಿದರು. ಈ ಸಂಬAಧ ಶೀಘ್ರ ಪತ್ರ ಚಳುವಳಿಯನ್ನು ಹಮ್ಮಿಕೊಳ್ಳುವುದಾಗಿ ಉಗಮ ಶ್ರೀನಿವಾಸ್ ತಿಳಿಸಿದರು.ಚಿಂತಕರು ಹಾಗೂ ವಾಗ್ಮಿಗಳಾದ ನಿಕೇತರಾಜ್ ಅವರು ಪೂರ್ಣಚಂದ್ರ ತೇಜಸ್ವಿ ಅವರ ಕೃತಿಯನ್ನು ರಂಗಕ್ಕೆ ಅಳವಡಿಸಿರುವುದೇ ನಿರ್ದೇಶಕಿಯ ಶಕ್ತಿಯನ್ನು ತೋರಿಸುತ್ತದೆ. ಅದ್ಭುತ ಬರೆಹಗಾರರಾದ ತೇಜಸ್ವಿ ಅವರ ಈ ಸಣ್ಣ ಕಥೆಯನ್ನು ರಂಗಕ್ಕೆ ಅಳವಡಿಸಿ ಸಹಸ್ರಾರು ಜನರಿಗೆ ತೋರಿಸುವುದು ಖುಷಿಯ ಸಂಗತಿ ಎಂದರು.ವ್ಯಕ್ತಿತ್ವ ವಿಕಸನ ಸಂಪನ್ಮೂಲ ವ್ಯಕ್ತಿ ಹೆಚ್.ಎನ್. ಚಂದ್ರಶೇಖರ್ ಮಾತನಾಡಿ ಪಲ್ಲವಿ ಅವರು ನಿಜಕ್ಕೂ ಪ್ರತಿಭಾನ್ವಿತೆ. ಚಿಕ್ಕ ವಯಸ್ಸಿನಲ್ಲೇ ರಂಗಭೂಮಿಗೆ ಬಂದು ನಾಟಕಗಳನ್ನು ನಿರ್ದೇಶಿಸುತ್ತಿರುವುದು ಹೆಮ್ಮೆಯ ವಿಷಯ. ಇವರಿಗೆ ಮುಂದೆ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸಿದರು.ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಕರಿಯಣ್ಣ ಮಾತನಾಡಿ ತುಮಕೂರಿನಲ್ಲಿ ರಂಗಪ್ರಯೋಗಗಳು ನಿರಂತರವಾಗಿ ನಡೆಯುತ್ತಲೇ ಇದೆ. ಕಲಾತ್ಮಕ ನಾಟಕ ಪ್ರದರ್ಶನಗಳು ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿನಿ ಪಲ್ಲವಿ ನಾಟಕ ನಿರ್ದೇಶಿಸಿ ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ತೋರಿಸುತ್ತಿರುವುದು ಖುಷಿಯ ವಿಚಾರ ಎಂದರು. ವೇದಿಕೆಯಲ್ಲಿ ನಾಟಕದ ನಿರ್ದೇಶಕಿ ಪಲ್ಲವಿ ನಾಗೇಂದ್ರ ಇದ್ದರು.ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಸತೀಶ್, ನಿವೃತ್ತ ಪ್ರಾಂಶುಪಾಲ ಎಸ್. ಸಿದ್ದಪ್ಪ ಮಾತನಾಡಿದರು. ವೇದಿಕೆ ಕಾರ್ಯಕ್ರಮದ ಬಳಿಕ ನಾಟಕ ಪ್ರದರ್ಶನಗೊಂಡು ಜನರ ಮೆಚ್ಚುಗೆ ಗಳಿಸಿತು.