ಅಡಿಕೆ ಮಾವು ಬೆಳೆಗೆ ವಿಮೆ ಮಾಡಿಸಲು ರೈತರಲ್ಲಿ ಮನವಿ
ತುಮಕೂರು(ಕ.ವಾ.)ಜು.೧೧: ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ೨೦೨೩-೨೪ ಸಾಲಿಗೆ ಕೊರಟಗೆರೆ ತಾಲ್ಲೂಕಿಗೆ ಅಡಿಕೆ ಮತ್ತು ಮಾವು ಬೆಳೆಗಳನ್ನು ವಿಮೆ ಯೋಜನೆಗೆ ಒಳಪಡಿಸಲಾಗಿದೆ ಎಂದು ತುಮಕೂರು ಮತ್ತು ಕೊರಟಗೆರೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳೆಗಳಿಗೆ ಸಾಲ ಪಡೆಯುವ ರೈತರು ಕಡ್ಡಾಯವಾಗಿ ವಿಮೆ ಮಾಡಿಸಬೇಕಿದ್ದು, ಬೆಳೆ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿರುತ್ತದೆ. ಆಯಾ ಹೋಬಳಿಗೆ ಸಂಬAಧಪಟ್ಟ ಅಡಿಕೆ ಹಾಗೂ ಮಾವು ಬೆಳೆಗಳಿಗೆ ವಿಮೆ ಮಾಡಿಸುವ ರೈತರು ಕೂಡಲೇ ನಿಗಧಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಭೂಮಿ ದಾಖಲೆಗಳಾದ ಪಹಣಿ, ಬ್ಯಾಂಕ್ ಉಳಿತಾಯ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿಗಳನ್ನು ಮತ್ತು ಸ್ವಯಂಘೋಷಿತ ಬೆಳೆ ವಿವರಗಳೊಂದಿಗೆ ತಾಲ್ಲೂಕಿನ ಯಾವುದಾದರು ರಾಷ್ಟಿçÃಕೃತ ಬ್ಯಾಂಕ್ಗಳಲ್ಲಿ ನೊಂದಣಿ ಮಾಡಿಸಬಹುದಾಗಿರುತ್ತದೆ.
ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್ಗೆ ಶೇ. ೫ರಂತೆ ೬೪೦೦ ಮತ್ತು ಮಾವು ಬೆಳೆಗೆ ೪೦೦೦ ವಿಮಾ ಕಂತನ್ನು ರೈತರು ಪಾವತಿಸಬೇಕಾಗಿದೆ.
ಅಡಿಕೆ ಬೆಳೆಗೆ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ ೧೫-೭-೨೦೨೩ ಮತ್ತು ಮಾವು ಬೆಳೆಗೆ ೩೧-೭-೨೦೨೩ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಆರ್ಎಸ್ಕೆ ಹೋಬಳಿ ಅಧಿಕಾರಿ, ಹಿಸನಿ ತೋಟಗಾರಿಕೆ ಕೊರಟಗೆರೆ, ದೂ.ವಾ.ಸಂ. ೦೮೧೩೮-೨೯೫೫೭೭, ತುಮಕೂರು-೯೮೪೪೦೪೨೩೫೬ನ್ನು ಸಂಪರ್ಕಿಸಲು ಕೋರಿದೆ.
ಅಡಿಕೆ ಮಾವು ಬೆಳೆಗೆ ವಿಮೆ ಮಾಡಿಸಲು ರೈತರಲ್ಲಿ ಮನವಿ

Leave a comment
Leave a comment