ಶಹಾಬಾದ: ಡಾ. ಅಂಬೇಡ್ಕರ ಮರಿ ಮೊಮ್ಮಗ ರಾಜರತನ ಅಂಬೇಡ್ಕರ್ ಅವರಿಗೆ ಜಯಂತೋತ್ಸವ ಸಮಿತಿ ಆಹ್ವಾನ ಪತ್ರಿಕೆ ನೀಡಿ ಸ್ವಾಗತ ಕೋರಿದರು.
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವದ ಅಂಗವಾಗಿ ಏಪ್ರಿಲ್ 22ರಂದು ಶಹಾಬಾದ ನಗರದ ಸರ್ಕಾರಿ ಬಾಲಕರ ಪ್ರೌಢ ಶಾಲೆ ಆವರಣದಲ್ಲಿ ನಡೆಯುವ ಇತಿಹಾಸಿಕ ಭಾರಿ ಬಹಿರಂಗ ಸಭೆಯಲ್ಲಿ ಭಾಗವಹಿಸಲು ಅಂಬೇಡ್ಕರ ಅವರ ವಂಶದ ಕುಡಿ ಅವರ ಮರಿ ಮೊಮ್ಮಗ ಆಯುಷ್ಮಾನ್ ರಾಜರತನ ಅಂಬೇಡ್ಕರ್ ಅವರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲು ಶಹಾಬಾದ ತಾಲ್ಲೂಕಿನ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ಶಂಕರ ಅಳೋಳ್ಳಿ ಹಾಗೂ ಗೌರವಾಧ್ಯಕ್ಷರಾದ ಸುರೇಶ ಮೆಂಗನ್. ವಿಜಯಕುಮಾರ್ ಹಳ್ಳಿ. ಭೀಮಯ್ಯ ಗುತ್ತೇದಾರ್, ಕಾಶಿನಾಥ್ ಜೋಗಿ ಮತ್ತು ಅನೇಕರು ಆಹ್ವಾನ ಪತ್ರಿಕೆ ನೀಡಿ ಸ್ವಾಗತವನ್ನು ಕೋರಿದರು.