ತುಮಕೂರು:ಪ್ರಪಂಚದೆಲ್ಲೆಡೆ ಚದುರಿರುವ ಒಕ್ಕಲಿಗರ ಸಮುದಾಯದ ಪಾಲಿಗೆ ವಿಶ್ವಮಾನವ ಸಂದೇಶ ಸಾರಿದ ರಸಋಷಿ ಕುವೆಂಪು ಅವರು ಬಾಳಿ ಬದುಕಿದ ಮನೆ ಕವಿ ಶೈಲ ಒಂದು ಶ್ರದ್ದಾ ಕೇಂದ್ರವಾಗಿದ್ದು, ವಿದ್ಯಾರ್ಥಿಗಳಿಗೆ ಇದರ ಪರಿಚಯ ಮಾಡಿಸುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಬೆಳಗುಂಬದಲ್ಲಿರುವ ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ತುಮಕೂರು ಜಿಲ್ಲಾ ಒಕ್ಕಲಿಗರ ನೌಕರರ ವೇದಿಕೆವತಿಯಿಂದ ಆಯೋಜಿಸಿದ್ದ ಕುವೆಂಪು ದಿನಾಚರಣೆ ಹಾಗೂ ಕುವೆಂಪು ರಚಿತ ಗೀತಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಕುವೆಂಪು ಬದುಕಿದ್ದ ಕಾಲದಲ್ಲಿ ಅವರು ಬಳಸುತಿದ್ದ ವಸ್ತುಗಳು, ಕೃಷಿ ಪರಿಕರಗಳು, ಮಲೆನಾಡಿನ ಪರಿಸರ ಇವೆಲ್ಲವುಗಳ ಪರಿಚಯ ನಮ್ಮ ಯುವಕರಿಗೆ ಆಗಬೇಕಿದೆ ಎಂದರು.
ತನ್ನ ಕವಿತೆಗಳ ಮೂಲಕ ವಿಶ್ವಮಾನವ ಸಂದೇಶ ಸಾರಿದ,ಅದರಂತೆ ನಡೆದುಕೊಂಡ ಕುವೆಂಪು ಈ ನಾಡು ಕಂಡ ಅತ್ಯಂತ ಶ್ರೇಷ್ಠರಲ್ಲಿ ಒಬ್ಬರು,ಇವರ ಕಾವ್ಯ,ನಾಟಕ,ಪ್ರಬಂಧಗಳು,ಕಾದoಬರಿಗಳು ಜಗತ್ತಿನ ಎಲ್ಲಾ ಭಾಷೆಗಳಿಗೂ ಭಾಷಾಂತರವಾಗಿ ಹೆಚ್ಚು ಜನರನ್ನು ತಲುಪುವಂತೆ ಸರಕಾರ ಮಾಡಬೇಕು.ಹಾಗೆಯೇ ಭಾರತ ಸರಕಾರ ಸಹ ಕುವೆಂಪು ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಮುರುಳೀಧರ ಹಾಲಪ್ಪ ಒತ್ತಾಯಿಸಿದರು.
ತುಮಕೂರು ಜಿಲ್ಲಾ ಒಕ್ಕಲಿಗರ ಸಂಘ ಮುಂದಿನ ದಿನಗಳಲ್ಲಿ ಕುವೆಂಪು ಜನ್ಮ ಜಯಂತಿಯನ್ನು ನಗರ ಪ್ರದೇಶಕ್ಕೆ ಬದಲಾಗಿ ಗ್ರಾಮೀಣ ಭಾಗದಲ್ಲಿ ಆಚರಿಸುವ ಮೂಲಕ ಹಳ್ಳಿಗಳಲ್ಲಿಯೂ ಕುವೆಂಪು ಅವರ ವೈಚಾರಿಕ ಚಿಂತನೆ,ಅವರ ತತ್ವಾದರ್ಶ ಗಳನ್ನು ಪರಿಚಯಿಸುವ ಕೆಲಸ ಮಾಡಬೇಕು.ಈ ಬಾರಿಯ ಕುವೆಂಪು ಗೀತ ಗಾಯನ ಸ್ಪರ್ಧೆಯಲ್ಲಿ ಮೊದಲ ಐದು ಬಹುಮಾನ ಪಡೆಯುವ ಸ್ಪರ್ಧಿಗಳಿಗೆ ಕುಪ್ಪುಳ್ಳಿಯ ಕುವೆಂಪು ಅವರ ಮನೆ ಸೇರಿದಂತೆ ಮಲೆನಾಡಿನ ಪ್ರವಾಸ ವ್ಯವಸ್ಥೆ ಮಾಡುವುದಾಗಿ ಮುರುಳೀಧರ ಹಾಲಪ್ಪ ಭರವಸೆ ನೀಡಿದರು.
ಪ್ರಪಂಚದೆಲ್ಲೆಡೆ ಚದುರಿರುವ ಒಕ್ಕಲಿಗರ ಸಮುದಾಯದ ಪಾಲಿಗೆ ವಿಶ್ವಮಾನವ ಸಂದೇಶ

Leave a comment
Leave a comment